Jhenkara

₹ 200

You will earn 2 points from this product

Delivery Options

Get delivery at your doorstep

Product Not Available

ವಿದ್ವಾಂಸ ಗ.ನಾ. ಭಟ್ಚರ ಕುರಿತು ನನ್ನಲ್ಲಿ ಆಸಕ್ತಿ, ಕುತೂಹಲ ಮತ್ತು ಗೌರವದ ಭಾವನೆ ಮೂಡಿ ಅದು ಗಟ್ಟಿಗೊಳ್ಳಲು ಕಾರಣ ಹಲವು.
ಭಟ್ಟರು ವೃತ್ತಿಯಲ್ಲಿದ್ದಾಗಲೂ, ವೃತ್ತಿ ಜೀವನದ ನಿವೃತ್ತಿಯ ನಂತರವೂ ಓದು, ಬರಹ, ಪ್ರವಚನ ಪ್ರವೃತ್ತಿಯನ್ನು ಅತ್ಯಾಸಕ್ತಿಯಿಂದ ಮುಂದುವರೆಸಿಕೊAಡು ಬರುತ್ತಿದ್ದಾರೆ. ನಿರಂತರ ಬರವಣಿಗೆ ಒಂದು ತಪಸ್ಸೇ ಸರಿ. ಝೇಂಕಾರ ತಲೆಬರಹದಲ್ಲಿ ಲೋಕಧ್ವನಿ ಪತ್ರಿಕೆಗೆ ಭಟ್ಟರು ಒಂದು ವರ್ಷಕಾಲ ಬರೆದ ಸಂಗ್ರಹಯೋಗ್ಯ ಲೇಖನಗಳು ಪುಸ್ತಕ ರೂಪದಲ್ಲಿ ಕೈಸೇರುತ್ತಿರುವುದು ಅತ್ಯಂತ ಖುಷಿಯ ಸಂಗತಿ. ಎಲ್ಲದಕ್ಕಿಂತ ಮುಖ್ಯವಾಗಿ ಲೋಕಧ್ವನಿ ಮತ್ತು ಗ.ನಾ. ಭಟ್ಟರು ಶಿರಸಿಯವರು, ಉತ್ತರಕನ್ನಡದವರು ಎಂಬುದು ನನ್ನ ಸಂತಸವನ್ನು ಇಮ್ಮಡಿಗೊಳಿಸಿದೆ.
ಗ.ನಾ. ಭಟ್ಟರು ಒದುವ ಆಸಕ್ತಿ ಇರವವರಿಗೆ ಭರಪೂರ ಹೂರಣ ಒದಗಿಸಿದ್ದಾರೆ. ಕೈಗೆತ್ತಿಕೊಂಡು ಓದಿದರೆ ಓದಿನ ಖುಷಿ ಓದುಗರಿಗೆ ದಕ್ಕುವುದು ಗ್ಯಾರಂಟಿ.
ಗ.ನಾ. ಭಟ್ಟರ ಲೇಖನಗಳನ್ನು ಪುಸ್ತಕ ರೂಪದಲ್ಲಿ ತಂದಿರುವ ಅಯೋಧ್ಯಾ ಪ್ರಕಾಶನಕ್ಕೂ ಅಭಿನಂದನೆಗಳು.
– ಹರಿಪ್ರಕಾಶ ಕೋಣೆಮನೆ
ಪ್ರಧಾನ ಸಂಪಾದಕ/ಸಿಇಒ
ವಿಸ್ತಾರ ನ್ಯೂಸ್


Reviews and Ratings

No Customer Reviews

Share your thoughts with other customers